ನಾ ಕಂಡ ಸೆನ್ಸೆಶನಲ್ ವರದಿಗಾರ ರವಿ ಬೆಳಗೆರೆ!…
• ಸಂತೋಷ ಮುಗಳಿ, ಶಿಕ್ಷಕರು ಹಾಗೂ ಪತ್ರಕರ್ತರು
“ಖಡ್ಗಕ್ಕಿಂತ ಹರಿತವಾದದ್ದು ಲೇಖನಿ” ಎನ್ನುವುದಕ್ಕೆ ಸರಿಯಾದ ಅರ್ಥವನ್ನು ಕೊಟ್ಟ ಅಕ್ಷರ ಮಾಂತ್ರಿಕ, ಕೆಚ್ಚೆದೆಯ ಪತ್ರಕರ್ತ, ಅದ್ಬುತ ಬರಹಗಾರ, ವಿಮರ್ಶಕ, ಅತ್ಯುತ್ತಮ ಪತ್ರಿಕೋದ್ಯಮಿ, ಯುವ ಹೃದಯಗಳ ಸಾಮ್ರಾಟ ಹೀಗೆ ಇನ್ನೂ ಹಲವಾರು ನಾಮಾಂಕಿತಗಳಿಂದ ಕರೆಯಲ್ಪಡುವ ಘಟ್ಟಿಗ ರವಿ ಬೆಳಗೆರೆ.
ಇತಿಹಾಸ ಅರಿಯದವನು ಇತಿಹಾಸ ಸೃಷ್ಠಿಸಲಾರ ಎಂಬ ನಾನ್ನುಡಿಗೆ ಪೂರಕವಾದವರೆ ರವಿ ಬೆಳಗೆರೆ. ಅದು ಹೇಗೆ ಅಂತಿರಾ?.. ಮೂಲತಃ ಬಡ ಕುಟುಂಬದಲ್ಲಿ ಜನಿಸಿ, ಬಾಲ್ಯದಲ್ಲಿ ಮನೆ ಮನೆಗೆ ಹಾಲು ಹಾಕುವುದರ ಜೊತೆಗೆ ಹಲವಾರು ಕೆಲಸಗಳನ್ನು ಮಾಡುತ್ತ, ದೇವರನ್ನು ಅರಸಿ ಹಿಮಾಲಯಕ್ಕೆ ಹೋಗಿ ಬಂದವರು. ಇತಿಹಾಸ ವಿಷಯದಲ್ಲಿ ಪದವಿ ಪಡೆದು, ಇತಿಹಾಸ ಬೋಧಕರಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿ, ನಂತರ ಆರ್ಥಿಕವಾಗಿ ಕಷ್ಟ ಅನಿಭವಿಸುತ್ತಿದ್ದ ರವಿ ಬೆಳಗೆರೆ ಬೊಧಕ ವೃತ್ತಿ ಹಾಗೂ ಬಳ್ಳಾರಿಯನ್ನು ಬಿಟ್ಟು ಬೆಂಗಳೂರಿಗೆ ಹೋಗಿ, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಪಿ ಲಂಕೇಶ ಪತ್ರಿಕೆ ಹಾಗೂ ಕರ್ಮವೀರ ಪತ್ರಿಕೆಯ ಸಂಪಾದಕ ಮತ್ತು ವರದಿಗಾರರಾಗಿ ಕೆಲಸ ಮಾಡುತ್ತಾ, ಸುಮಾರು ಕಥೆ ಮತ್ತು ಲೇಖನಗಳನ್ನು ಬರೆದು ಜನರ ಮನಸ್ಸನ್ನು ಸೇಳೆಯುತ್ತಾ, ಬೆಂಗಳೂರಿನ ಭೂಗತ ಜಗತ್ತಿನ ರೊಚಕ ಕಥೆಗಳನ್ನು ಕರ್ಮವೀರ ಪತ್ರಿಕೆಯಲ್ಲಿ ಬರೆಯುತ್ತಾ, ಭೂಗತ ಜಗತ್ತಿನ ರೌಡಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ದೀರ ಈತ. ಕ್ರೈಂ ನಡೆಯುವದರ ಬಗ್ಗೆ ಪೋಲಿಸರಿಗಿಂತ ಮೊದಲೇ ಇವರು ತಿಳಿದುಕೊಳ್ಳುವಂತಃ ಚಾಣಾಕ್ಷ ರವಿ ಬೆಳಗೆರೆ.
ನಂತರ ಹಾಯ್ ಬೆಂಗಳೂರು ಎಂಬ ಸ್ವಂತ ಪತ್ರಿಕೆ ಪ್ರಾರಂಭಿಸಿ, ಪತ್ರಿಕಾ ರಂಗದಲ್ಲಿ ತಮ್ಮದೆ ಆದ ಛಾಪು ಮೂಡಿಸಿ, ಖಡ್ಗಕ್ಕಿಂತ ಹರಿತವಾದದ್ದು ಲೇಖನಿ ಎಂಬುದನ್ನು ನಿರೂಪಿಸಿದರು. ಹಲವಾರು ಕಷ್ಟ ನೋವುಗಳನ್ನು ಕಂಡ ರವಿ ಬಡ ಮಕ್ಕಳಿಗಾಗಿ ಪ್ರಾರ್ಥನಾ ಶಾಲೆಯೊಂದನ್ನು ತೆರೆದರು. ಯುವ ಮನಸ್ಸುಗಳಿಗಾಗಿ ‘ಓ ಮನಸ್ಸೆ’ ಎಂಬ ಪತ್ರಿಕೆ ಮತ್ತು ‘ದ್ವನಿ ಸುರುಳಿ’ ಪ್ರಾರಂಭ ಮಾಡಿದ ಅವರು ಖಾಸಗಿ ‘ಈಟಿವ್ಹಿ’ ವಾಹಿನಿಯ ಕ್ರೈಂ ಡೈರಿಯಲ್ಲಿ ಕ್ರೈಂ ಸುದ್ದಿಗಳ ನಿರೂಪನಾಶೈಲಿಯ ಒಂದು ಅಲೆಯನ್ನೇ ಸೃಷ್ಠಿಸಿ, ತಮ್ಮ ಕಂಚಿನ ಕಂಠದಿಂದ ಎಲ್ಲರ ಮನೆಮಾತಾಗಿ; ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೆರಿಸಿಕೊಂಡಿದ್ದಾರೆ.
ಪ್ರೇರಣಾದಾಯಕ ದ್ವನಿಸುರುಳಿಗಳಿಂದ ಯುವ ಪೀಳಿಗೆಗೆ ದಾರಿ ದೀಪವಾಗುತ್ತಾ, ಇಂದಿನ ಸಮಾಜದಲ್ಲಿ ತಮ್ಮ ಬದುಕನ್ನು ತಾವು ಹೇಗೆ ಕಟ್ಟಿಕೊಳ್ಳಬೇಕು ಎನ್ನುವ ಅವರ ದ್ವನಿ ಅದೆಷ್ಟೋ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಅಷ್ಷೇ ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತ ಅದೆಷ್ಟೋ ನೊಂದ ಪ್ರೇಮಿಗಳ ಬಾಳಲ್ಲಿ ಹೊಸ ಬದುಕಿನ ಚಿಗುರು ಚಿಗುರುವಂತೆ ಮಾಡಿ, ಇಪ್ಪತ್ತು ರೂಪಾಯಿಗಳಿಂದ ಕೋಟ್ಯಾಧಿಪತಿಯಾದ ಇವರ ಸ್ಪೂರ್ತಿದಾಯಕ ಧ್ವನಿ, ದೊಡ್ಡ ಬಂಡೆಗಲ್ಲನ್ನೆ ಕರಗಿಸುವಂತಃ ಶಕ್ತಿ ಇವರ ಬರವಣಿಗೆಯಲ್ಲಿದೆ.
ಇವರ ಸಾಕಷ್ಟು ಕಥೆ ಕಾದಂಬರಿಗಳ, ಲೇಖನಗಳ ಹಾಗೂ ಜೀವನದ ಸುತ್ತ ವಿವಾದಗಳು ಸೃಷ್ಠಿಯಾಗಿದ್ದವು. ಅದಕ್ಕೆ ತಲೆ ಕೆಡಿಸಿಕೊಳ್ಳದೆ ಇಡಿ ಪತ್ರಿಕಾ ರಂಗದಲ್ಲಿ ಮೈನೀರಿಳಿಸುವಂತಹ ರೋಚಕ ಬರಹಗಾರರಾಗಿ, ಹಿಂದೆAದು ಕಾಣದ ಸೆನ್ಸೆಶನಲ್ ವರದಿಗಾರರಾಗಿ; ಜಗತ್ತನ್ನು ಬೆಳಗುವ ರವಿಯಂತೆ ಕಂಗೊಳಿಸಿದ ರವಿ ಬೆಳಗೆರೆ.
ಅವರ ಬಗ್ಗೆ ಹೇಳುತ್ತಾ ಹೋದರೆ ಪದಗಳೆ ಸಾಲದು ಅವರ ವಿವಾದಗಳನ್ನು ಬದಿಗೊತ್ತಿ, ಅವರ ವ್ಯಕ್ತಿತ್ವ, ಕಷ್ಠಕರ ಬದುಕಿನ ದಾರಿ, ಪತ್ರಿಕಾ ರಂಗದಲ್ಲಿ ಬೆಳೆದ ಬೆಳವಣಿಗೆ ಜೀವಮಾನ ಸಾಧನೆ ಇವೆಲ್ಲವೂಗಳು ನಮ್ಮಂತಹ ಯುವ ಹೃದಯಗಳಿಗೆ ಸ್ಪೂರ್ತಿಯ ಚಿಲುಮೆ ರವಿ ಬೆಳಗೆರೆ.
ಇಂತಹ ದೀರ ಪತ್ರಕರ್ತ ದಿ. ರವಿ ಬೆಳಗೆರೆ ಅವರ ಜನ್ಮದಿನೋತ್ಸವದ ಶುಭಾಯಗಳು