ಗೋದಾವರಿ ಸಕ್ಕರೆ ಕಾರ್ಖಾನೆಯ ಮೇಲೆ ರೈತರು ಇಟ್ಟಿರುವ ಪ್ರೀತಿ ವಿಶ್ವಾಸ ಹೀಗೆ ಇರಲಿ : ಬಿ ಆರ್ ಬಕ್ಷಿ
ಸಮೀರವಾಡಿ: ಗ್ರಾಮೀಣ ಪ್ರದೇಶದ ಬಡ ಜನರಿಗೆ ಹಾಗೂ ಸುತ್ತಲಿನ ಗ್ರಾಮದ ರೈತರಿಗೆ ಅನುಕೂಲ ಆಗುವ ದೃಷ್ಟಿಯಿಂದ ಉಚಿತ ಅರೋಗ್ಯ ತಪಾಸಣಾ ಹಾಗೂ ಔಷದಿ ವಿತರಣಾ ಶಿಬಿರ ಅಯೋಜಿಸಲಾಗಿದೆ,ಇದರಲ್ಲಿ ಕಣ್ಣು ತಪಾಸಣೆ, ಎಲುವು ಕೀಲುಗಳ, ಬಿಪಿ ಸುಗರ ವಿಶೇಷ ಸ್ರಿರೋಗ ತಜ್ಞರು ಹಾಗೂ ವಿವಿಧ ವಿಭಾಗಗಳು ವೈದ್ಯರು ಒಂದೆಡೆ ಸೇರಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಬಿ ಅರ್ ಬಕ್ಷಿ ಹೇಳಿದರು.
ಅವರು ಸಮೀರವಾಡಿಯ ಸೋಮೈಯಾ ಕನ್ನಡ ಮಾಧ್ಯಮ ಶಾಲೆಯಲ್ಲಿ ಏ.06 ರವಿವಾರದಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಗ್ರಾಮೀಣ ವಿಕಾಸ ಕೇಂದ್ರ ಹಾಗೂ ಸೈದಾಪೂರ ಗ್ರಾಮ ಪಂಚಾಯತಿ ವತಿಯಿಂದ ನಡೆದ ಉಚಿತ ಅರೋಗ್ಯ ತಪಾಸಣಾ ಹಾಗೂ ಉಚಿತ ಔಷಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ನಮ್ಮ ನಮ್ಮ ಕಾರ್ಖಾನೆಯ ಮೇಲಿ ಇಟ್ಟಿರುವ ನಂಬಿಕೆ, ಪ್ರೀತಿ, ಹಾಗೂ ವಿಶ್ವಾಸ ಹೀಗೆ ಇರಲಿ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಿದರು.
ಬಳಿಕ ಸೈದಾಪೂರ ಗ್ರಾಮ ಪಂಚಾಯತಿಯ ಅಧ್ಯಕ್ಷ ಮಹಾಲಿಂಗ ಸನದಿ ಮಾತನಾಡುತ್ತಾ, ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅತ್ಯುತ್ತಮ ಹಾಗೂ ನುರಿತ ಅನುಭವಿ ವೈದ್ಯರ ತಂಡ ಮುಂಬಯಿಂದ ಬಾಂದಿದ್ದಾರೆ. ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಲು ಮನವಿ ಮಾಡಿಕೊಂಡರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಮುಂಜಾನೆ 8 ಗಂಟೆಯಿಂದ ಸಾಯಂಕಾಲ 05 :30 ರವರೆಗೆ ಸಮೀರವಾಡಿ ಸುತ್ತಲಿನ ಸುಮಾರು 500 ಕ್ಕೂ ಹೆಚ್ಚಿನ ಜನ ಹಾಗೂ ಮುಂಬೈನ ಕೆ ಜೆ ಸೋಮೈಯಾ ಮೆಡಿಕಲ್ ಕಾಲೇಜಿನ 25 ಜನ ವೈದ್ಯರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಗೋದಾವರಿ ಸಕ್ಕರೆ ಕಾರ್ಖಾನೆಯ ಆಡಳಿತಾದಿಕಾರಿ ದಿನೇಶ ಶರ್ಮಾ, ಎಂ ರಾಮಚಂದ್ರ, ಅರ್ ವ್ಹಿ ಸೊನವಾಲ್ಕರ, ಎಮ್ ಎಮ್ ಖಿಲಾರಿ ಎಸ್ ಒ ಸಿ ಯುನಿಯನ್ ಅಧ್ಯಕ್ಷ ಬಸವಾರಾಜ ಭದ್ರಶೆಟ್ಟಿ, ಮಜದೂರ ಯುನಿಯನ್ ಸದಸ್ಯ ಬಿ ಪಿ ಪಾಟೀಲ, ಸಂಜೀವ ಬ್ಯಾಳಿ, ರೇಖಾ ಮಠಪತಿ ಹಾಗೂ ಕಾರ್ಖಾನೆಯ ಎಲ್ಲಾ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮದ ಹಿರಿಯರು, ಮುಖಂಡರು ಉಪಸ್ಥಿತಿರಿದ್ದರು
ಗ್ರಾಮೀಣ ವಿಕಾಸ ಕೇಂದ್ರದ ಆಡಳಿತಾಧಿಕಾರಿ ಡಾ. ವ್ಹಿ ಪಿ ಕಣವಿ ನೀರೂಪಿಸಿ ವಂದಿಸಿದರು.

ವರದಿ: ಸಂತೋಷ ಮುಗಳಿ