ಬೆಳಗಾವಿ
ಮುಗಳಖೋಡ: ಮಾ.21 ರಿಂದ ಪ್ರಾರಂಭಗೊಂಡ ಎಸ್ಎಸ್ಎಲ್ ಸಿ ಪರೀಕ್ಷೆಯು ಪಟ್ಟಣದ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಬಿ ಎನ ಕೆ ಪ್ರೌಢ ಶಾಲೆಯ ಪರಿಕ್ಷಾ ಕೇಂದ್ರದಲ್ಲಿ ಪಟ್ಟಣ ಸೇರಿದಂತೆ, ಖಣದಾಳ, ಸುಲ್ತಾನಪುರ ಗ್ರಾಮದ ಏಳು ಪ್ರೌಢ ಶಾಲೆಯ ಒಟ್ಟು 543 ವಿದ್ಯಾರ್ಥಿಗಳು ಇದ್ದು ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ 542 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಯಾವುದೇ ತೊಂದರೆ ಇಲ್ಲದೆ ಶಾಂತಿಯುತವಾಗಿ ಪರೀಕ್ಷೆ ನಡಯಿತು.
ಪರೀಕ್ಷಾ ಕೇಂದ್ರಕ್ಕೆ ಬೇಟಿ ನಿಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್ ಇವರು ಮಾತನಾಡಿ, ರಾಯಬಾಗ ತಾಲ್ಲೂಕಿನಾದ್ಯಂತ 7600 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಎಲ್ಲ ಪರಿಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ, ಜೊತೆಗೆ ವಿದ್ಯಾರ್ಥಿಗಳ ಅರೋಗ್ಯದ ಅರೈಕೆಗಾಗಿ ಆರೋಗ್ಯ ಇಲಾಖೆ, ಇಗಿ ಭದ್ರತೆಗಾಗಿ ಪೋಲಿಸ್ ಇಲಾಖೆ ಇವರ ಸಹಯೋಗದೊಂದಿಗೆ ವಿದ್ಯಾರ್ಥಿಗಳು ನಿರ್ಭಯವಾಗಿ ಮತ್ತು ಅಚ್ಚುಕಟ್ಟಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಅರ್ ನಾಯಿಕ, ಎಸ್ ಎಸ್ ಮದಾಳೆ, ಡಿ ವ್ಹಿ ನಡಟ್ಟಿ, ಸಿ ಆರ್ ಪಿ ಬಿ ಸಿ ಬಾಗೆನ್ನವರ ಮತ್ತು ಪೋಲಿಸ್ ಸಿಬ್ಬಂದಿ ಎಸ್ ಬಿ ಬೆಕ್ಕೆರಿ ಹಾಗೂ ಮತ್ತಿತರರು ಇದ್ದರು
