ಶ್ರೀ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ!

Share the Post Now

ಹಳ್ಳೂರ.

ಜಾತ್ರೆಗಳು ಭಾರತೀಯ ಪಾರಂಪರಿಕ ಸಂಸ್ಕೃತಿಯ ಪ್ರತೀಕವಾಗಿದೆ ಬಾಂಧವ್ಯ ಬೆಸೆಯುವ ಅದ್ಭುತ ಅಸ್ತ್ರ , ಬೇಧ ಭಾವ ಮರೆತು ಬಾಂಧವ್ಯ ಬೆಸೆಯುವದು ಜಾತ್ರೆಗಳಲ್ಲಿ ಕಾಣಬಹುದು ಎಂದು ರೇವಣ ಸಿದ್ಧೇಶ್ವರ ಸ್ವಾಮೀಜಿ ಅವರು ಹೇಳಿದರು. 

                                     ಅವರು ಹಳ್ಳೂರ ಗ್ರಾಮದ ಶ್ರೀ ಬಸವ ನಗರ ಕ್ರಾಸ್ ನಲ್ಲಿರುವ ಶ್ರೀ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ ಜಾತ್ರೆಗಳು ಹುಗ್ಗಿ ಜಾತ್ರೆಗಳಾಗದೆ ಮಹಾತ್ಮರನ್ನು ಕರೆಸಿ ಒಳ್ಳೆಯ ಆಚಾರ ವಿಚಾರ ಧಾರ್ಮಿಕ ಕಾರ್ಯಕ್ರಮ ನಡೆಸಿ ಸನ್ಮಾರ್ಗದಲ್ಲಿ ಸಾಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು.ಪ್ರತೀ ವರ್ಷ ಗ್ರಾಮದಲ್ಲಿಯೇ ವಿಶೇಷವಾಗಿ ಜಾತ್ರೆ ಜರುಗುತ್ತಿದೆಂದು ಹೇಳಿದರು.          ಸಿದ್ದೇಶ್ವರ ಶರಣರು ಮಾತನಾಡಿ ಶ್ರಾವಣ ಮಾಸ ಶ್ರೇಷ್ಠವಾದದ್ದು ಸತ್ಸಂಗದಲ್ಲಿ ಬಾಗವಹಿಸಿ ಪ್ರಪಂಚ ಮಾಡಿ ಪಾರಮಾರ್ಥ ಗೆದ್ದು ಮಾನವ ಜೀವನ ಸಾರ್ಥಕ ಮಾಡಿಕೊಳ್ಳುರೆಂದು ಹೇಳಿದರು. ಈ ಸಮಯದಲ್ಲಿ ಯುವ ನಾಯಕರಾದ ಸರ್ವೋತ್ತಮ    ಜಾರಕಿಹೋಳಿ.ಶಾಸಕರ ಆಪ್ತ ಸಹಾಯಕರಾದ ಅಬ್ದುಲ್ ಮಿರ್ಜಾ ನಾಯ್ಕ.ಅರ್ಚಕರಾದ ಮಲ್ಲಪ್ಪ ಅಲಗೊಂಡ. ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ಸಿದರಾಯ ಬೆಣಚಿನಮರಡಿ.ಉಪಾಧ್ಯಕ್ಷ ಬಸಪ್ಪ ಮಾಲಗಾರ. ಶಿವಪ್ಪ ಕೋoಗಾಲಿ. ಮಾಜಿ ಜಿಲ್ಲಾ, ಪ, ಸದಸ್ಯ ಭೀಮಶಿ ಮಗದುಮ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ. ಚನ್ನವೀರಯ್ಯ ಹೀರೆಮಠ.ಕರೆಪ್ಪ ಹನಗಂಡಿ. ಸಂಜಯ ಹೊಸಟ್ಟಿ. ಗಂಗಾಧರ ಮಣ್ಣಾಪುರ.ಬಸವರಾಜ ಹೊಸಟ್ಟಿ. ಸಿದ್ದಪ್ಪ ಮಾಳಿ ಸೇರಿದಂತೆ ಭೀರಸಿದ್ದೇಶ್ವರ ದೇವಸ್ಥಾನದ ಕಮಿಟಿಯವರಿದ್ದರು.

Leave a Comment

Your email address will not be published. Required fields are marked *

error: Content is protected !!