ಬಿತ್ತನೆ ಮಾಡಿ ಕೈ ಸುಟ್ಟುಕೊಂಡ ಅನ್ನದಾತರ ನೆರವಿಗೆ ಸರ್ಕಾರ ಬರುವದೆ?

Share the Post Now

ಈ ವರ್ಷ ಮುಂಗಾರು ಮಳೆ ತಡವಾಗಿ ಆಗಮಿಸಿದರು ಸರಿಯಾಗಿ ಮಳೆಯಾಗದೆ ಇರುವದರಿಂದ ರೈತರು ಬಿತ್ತಿದ ಬೀಜ ಕಮರಿ ಹೋಗುತ್ತಿವೆ ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಕೈ ಸುಟ್ಟುಕೊಂಡಿದ್ದಾರೆ ಅಷ್ಟ ಅಲ್ಲಾ ಇದೆ ರೀತಿ ಮುಂದುವರೆದರೆ ಸರ್ಕಾರವು ಸಹ ಸಂಕಷ್ಟ ಅನುಭವಿಸಬೇಕಾಗುತ್ತದೆ.

ಅಗಷ್ಟ ಮೊದಲವಾರದಿಂದ ಮಳೆ ಕಡಿಮೆ ಯಾಗುತ್ತಿದೆ ಈ ವಾರ ಮಳೆಯಾಗದಿದ್ದರೆ ಬಿತ್ತಿದ ಬೀಜ ಒಣಗುವ ಭೀತಿ ರೈತನದಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಅಗಷ್ಟ 10 ರಿಂದ ಜಲಾಶಯಗಳ ಒಳ ಹರಿವು ಕುಸಿದಿದೆ,ನದಿ ಹಳ್ಳಗಳು ಸೊರಗಿವೆ.

ಬೆಳಗಾವಿ ಖಾನಾಪುರ ತಾಲೂಕಿನಲ್ಲಿ ಭತ್ತ ಬೆಳೆಯುವ ನೀರಾವರಿ ಪ್ರದೇಶಕ್ಕೂ ಚಿಂತೆಯ ಕಾರ್ಮೊಡ ಕವಿದಿದೆ, ಸಂಕೇಶ್ವರ,ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ರಾಯಭಾಗ ಗೋಕಾಕ ಬೈಲಹೊಂಗಲ ಸವದತ್ತಿ ತಾಲೂಕಿನಲ್ಲಿ ಜೋಳ,ತೊಗರಿ, ಗೊಂಜ್ಯಾಳ, ಸಜ್ಜೆ, ಹೆಸರು ಮುಂತಾದ ಆಹಾರ ಧಾನ್ಯ ಮತ್ತು ಸೂರ್ಯಕಾಂತಿ, ಸೋಯಾಬಿನ, ಶೆಂಗಾ ,ಹತ್ತಿ ಹಾಗೂ ವಾಣಿಜ್ಯ ಬೆಳೆಗಳಾದ ಕಬ್ಬು ಭತ್ತಗಳಿಗೆ ನೀರಿನ ಅಭಾವ ದಿಂದ ತೇವಾಂಶದ ಕೊರತೆ ಉಂಟಾಗಿದೆ,ವಾತಾವರಣ ಏರುಪೆರುಗಳಿಂದ

ಬೇಳೆಗಳಿಗೆ ಕೀಟ ಮತ್ತು ರೋಗಗಳು ಬರುವ ಆತಂಕ ರೈತರಲ್ಲಿ ಉಂಟಾಗಿದೆ.

ಜೂನ್ ನಲ್ಲಿ ಅಲ್ಪಸ್ವಲ್ಪ ಸುರಿದ ಮಳೆಗೆ ಒಣ ಪ್ರದೇಶದ ರೈತರು ಜೋಳ, ಗೊಂಜ್ಯಾಳ ಶೇಂಗಾ ಬಿತ್ತನೆ ಮಾಡಿದ್ದಾರೆ ಆದರೆ ಅಗಷ್ಟದಲ್ಲಿ ಮಳೆ ಕೈಕೊಟ್ಟಿದ್ದರಿಂದ ಬಿತ್ತಿದ ಬೇಳೆ ಒಣಗಿ ನಾಶವಾಗಿದೆ .ನಷ್ಟದ ಹೊರೆ ,ಸಾಲದ ಭಾದೆ ತಾಳಲಾರದೆ ರೈತ ಕೈ ಸುಟ್ಟುಕೊಂಡಿದ್ದಾನೆ.

ಈ ತೊಂದರೆ ಕೇವಲ ಬೆಳಗಾವಿ ಜಿಲ್ಲೆಯ ರೈತರ ಸಮಸ್ಯೆ ಯಾಗಿರದೆ ಇಡಿ ರಾಜ್ಯದಲ್ಲಿ ರೈತರು ನಷ್ಟ ಅನುಭವುಸುತ್ತಿದ್ದಾರೆ , ರೈತರು ಆತ್ಮಹತ್ಯೆಗೆ ಶರಣಾಗುವದನ್ನು ತಪ್ಪಸಲು ಸರ್ಕಾರ ರೈತರ ನೇರವಿಗೆ ಬರಬೇಕಾಗಿದೆ ಈ ಕುರಿತು ರೈತ ಮಹಿಳೆ ದುಂಡವ್ವಾ ಪೂಜೆರಿ ಮತ್ತು ಶಂಕರ ನಿಲಜಗಿ ಮಾತನಾಡಿ ಸಾಲ ಸೂಲಾ ಮಾಡಿ ಬೀಜ ಬಿತ್ತನೆ ಮಾಡಿ ಗೋಬ್ಬರ ಹಾಕಿ ಕೈ ಸುಟ್ಟುಕೊಂಡು ಹಾನಿ ಅನುಭವಿಸುತ್ತಿದ್ದೆವೆ ಸರ್ಕಾರ ಕೂಡಲೆ ರೈತರ ಸಹಾಯಕ್ಕೆ ಬರಬೇಕು ಒತ್ತಾಯಿಸಿದರು

ಬಾಬು ಎಂಬ ರೈತ ಹೋಲದಲ್ಲಿ ಕೆಲಸವಿಲ್ಲದೆ ಹಮಾಲಿ ಮಾಡುವ ಪರಿಸ್ಥಿತಿ ನನಗೆ ಬಂದಿದೆ ಎಂದು ತನ್ನ ಅಳಲನ್ನು ತೊಡಿಕೊಂಡನು

ಅಳಿದು ಉಳಿದ ಬೆಳೆಗಳನ್ನು ಸಂರಕ್ಷಿಸಲು ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಆರ್ ಬಿ ನಾಯ್ಕರ ರೈತರಿಗೆ ಸಲಹೆ ನೀಡಿ ಬೆಳೆಗಳಿಗೆ ಸೂಕ್ತ ಔಷಧಿ ನೀಡುವ ಮೂಲಕ ಮುಂದಾಗುವ ನಷ್ಟವನ್ನು ತಪ್ಪಸಬಹುದಾಗಿದೆ ಕಾರಣ ರೈತರು ಕೃಷಿ ಇಲಾಖೆ ಮಾರ್ಗದರ್ಶನದಂತೆ ಔಷಧ ಸಿಂಪರಣೆ ಮಾಡಬೇಕು ಎಂದರು

Leave a Comment

Your email address will not be published. Required fields are marked *

error: Content is protected !!