ವರದಿ: ಪ್ರೊ ರಾಜಶೇಖರ ಶೇಗುಣಸಿ..
ಜನಗಣತಿಯ ಸರಿಯಾದ ಮಾಹಿತಿ ನೀಡಲು ಒತ್ತಾಯ, ವಿವಿಧ ಬೇಡಿಕೆ ಈಡೇರದಿದ್ದರೆ ಮಾಳಿ ಸಮಾಜದಿಂದ ಉಗ್ರ ಹೋರಾಟದ ನಿರ್ಧಾರ.
ಬೆಳಗಾವಿ.
ಮುಗಳಖೋಡ: ಸಿ.ಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇತ್ತೀಚೆಗೆ ನಡೆಸಿದ ಮಾಳಿ-ಮಾಲಗಾರ ಸಮಾಜದ ಜನಗಣತಿಯು ಅವೈಜ್ಞಾನಿಕವಾಗಿದೆ. ಇದರಲ್ಲಿ ಮಾಳಿ ಮಾಲಗಾರ ಸಮಾಜದ ಅಂಕಿ ಅಂಶವು ಕೇವಲ 83 ಸಾವಿರ ಎಂಬ ಮಾಹಿತಿ ಉಲ್ಲೇಖಿಸಲಾಗಿದೆ, ಇದು ಖಂಡನೀಯವಾದದ್ದು ಎಂದು ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಡಾ. ಸಿ. ಬಿ. ಕುಲಿಗೋಡ ಆಕ್ರೋಶ ವ್ಯಕ್ತಪಡಿಸಿದರು.
ಅವರು ಪಟ್ಟಣದ ಚವಿವ ಸಂಘದ ಆವರಣದ ಶ್ರೀ ಮಾಧವಾನಂದ ಸಭಾ ಭವನದಲ್ಲಿ ಮಾಳಿ ಮಾಲಗಾರ ಸಮಾಜದವರು ಏ.16 ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯದಲ್ಲಿ ಮಾಳಿ ಮಾಲಗಾರ ಸಮಾಜದವರು 46 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಸರ್ಕಾರದ ಜಾತಿಗಣತಿಯನ್ನು ಮರು ಪರಿಶೀಲನೆ ಮಾಡಬೇಕು. ಇಲ್ಲವಾದಲ್ಲಿ ನಾವೇ ಸಮಾಜದ ಗಣತಿ ಮಾಡಿ ವರದಿ ಸಲ್ಲಿಸುತ್ತೇವೆ. ಒಂದು ವೇಳೆ ಇದೆ ಗಣತಿ ಮುಂದುವರೆದರೆ ಸಮಾಜದಿಂದ ಉಗ್ರವಾದ ಹೋರಟ ಮಾಡಲಾಗುತ್ತದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಬಳಿಕ ಡಾ.ರವಿ ಕುರುಬೆಟ, ಕಾಡು ಮಾಳಿ, ಗೀರಿಶ ಬುಟಾಳಿ ಮಹಾಂತೇಶ ಮಾಳಿ, ಕಾಶಿನಾಥ ಮಾಳಿ ಸಭೆಯನ್ನುದ್ದೇಶಿಸಿ ಮಾತನಾಡಿ ಹೊಟ್ಟೆ ಪಾಡಿಗಾಗಿ ಕಾಯಿಪಲ್ಯ ಗಳನ್ನು ಮಾರಾಟ ಮಾಡುತ್ತಾ ಜೀವನ ಸಾಗಿಸುವ ಸಮಾಜ ನಮ್ಮದಾಗಿದೆ.
ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರೆಯಲು ಅವಕಾಶ ಕಲ್ಪಿಸಿಕೊಳ್ಳಲು ಆದಷ್ಟು ಬೇಗನೆ ನಮ್ಮ ಸಮುದಾಯದ ಪ್ರತ್ಯೇಕ ನಿಗಮ ಸ್ಥಾಪಿಸಿ ಅಧ್ಯಕ್ಷರನ್ನು ನೇಮಕ ಮಾಡಿ ಸಮಾಜಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ಗಮನಹರಿಸಬೇಕು ಮತ್ತು ಮಾಳಿ ಮಾಲಗಾರ ಸಮುದಾಯದ ಜನಸಂಖ್ಯೆ ಕುರಿತು ಸರಿಯಾದ ಮಾಹಿತಿ ಒದಗಿಸಬೇಕು ಎಂದು ಪತ್ರಿಕಾ ಗೋಷ್ಠಿಯ ಮೂಲಕ ಸರ್ಕಾರಕ್ಕೆ ಬೇಡಿಕೆ ಇಟ್ಟರು.
ನಮ್ಮ ಬೇಡಿಕೆ ಈಡೇರಿಸದಿದ್ದರೆ 2028 ರ ಚುನಾವಣೆಯಲ್ಲಿ ನಮ್ಮ ಮಾಳಿ ಮಾಲಗಾರ್ ಸಮಾಜ ಏನು ಅನ್ನೋದನ್ನ ಸರಕಾರಕ್ಕೆ ತೋರಿಸುತ್ತೇವೆ ಎಂದು ಸಮಾಜದ ಅಧ್ಯಕ್ಷರಾದ ಡಾಕ್ಟರ್ ಸಿ ಬೀ ಕೂಲಿಗೊಡ ಆಕ್ರೋಶ ವ್ಯಕ್ತಪಡಿಸಿದರು.
.ಈ ಸಂದರ್ಭದಲ್ಲಿ ಮಾಳಿ ಮಾಲಗಾರ ಸಮಾಜದ ಮುಖಂಡರಾದ ಸದಾಶಿವ ಹೊಸಮನಿ, ಗೋಪಾಲ ಯಡವಣ್ಣವರ, ಮಹಾದೇವ ತೇರದಾಳ, ಸಂಜು ಅಥಣಿ, ಉಧ್ಯಮಿ ಶಿವಪ್ಪ ಹಳ್ಳೂರ, ಪರಪ್ಪ ಕುಲಿಗೋಡ, ಶಿವಪುತ್ರ ಯಡವಣ್ಣವರ, ಸಂಜಯ ಕುಲಿಗೋಡ, ಮಹಾದೇವ ಹೊಸಟ್ಟಿ, ಬಸವರಾಜ ಬಂಬಲವಾಡ, ಮಲ್ಲಪ್ಪ ಗೋಲಬಾವಿ, ಸುಭಾಷ ಅಳಗೋಡಿ, ಮಹಾದೇವ ಬಂಬಲವಾಡ, ಬಾಳು ಮಾಳಿ, ಮಲ್ಲೇಶ ಲಿಂಬಿಗಿಡದ, ಸುರೇಶ ಕಾಳಿಂಗೆ, ಶಿವಪ್ಪ ತಾನಪ್ಪಗೋಳ, ಸಿದ್ದಪ್ಪ ಮೆಂಡಿಗೇರಿ ಇತರರು ಇದ್ದರು.