ಹಳ್ಳೂರ.
ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಂಗಳವಾರದಂದು ಹಳ್ಳೂರ , ಕಪ್ಪಲಗುದ್ಧಿ, ಶಿವಾಪೂರ ಗ್ರಾಮದ ಹಿರಿಯರ ಸಮ್ಮುಖದಲ್ಲಿ ನೆಡೆದ ಸಭೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಳೆ ಬೆಳೆ ಚೆನ್ನಾಗಿ ಆಗಿ ಜನರಿಗೆ ಸುಖ ಸಮೃದ್ಧಿ ಆ ದೇವರು ಕರುಣಿಸಲೆಂದು ವಾರ ಹಿಡಿಯಲು ತೀರ್ಮಾನಿಸಿದ್ದಾರೆ ಮೊದಲನೇ ವಾರ ಮಂಗಳವಾರ ದಿ 17/6/2025 ಪ್ರಾರಂಭ ಮಂಗಳವಾರ ,
ಶುಕ್ರವಾರ ಹಿಡಿದು ಕೊನೆದು 01/7/ 2025 ಮಂಗಳವಾರ ರಂದು ಮುಕ್ತಾಯಗೊಳ್ಳುತ್ತದೆ. ಹಿಂದಿನ ಸಾಂಪ್ರದಾಯಿಕ ಪದ್ಧತಿ ಅಳವಡಿಸಿಕೊಂಡು ಕಟ್ಟು ನಿಟ್ಟಾಗಿ ನಿಯಮಗಳನ್ನು ಪಾಲಿಸಿ ದೇವರ ಪ್ರೀತಿಗೆ ಪಾತ್ರರಾಗಬೇಕೆಂದು ಗುರು ಹಿರಿಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಸಮಯದಲ್ಲಿ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಗುರುಹಿರಿಯರು , ಅರ್ಚಕರು ಉಪಸ್ಥಿತರಿದ್ದರು.