ಬೆಳಗಾವಿ.ಹಳ್ಳೂರ .
ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ವಿವಿಧ ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿ ಆಗ್ರಹಿಸಿ ಮೂಡಲಗಿ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು 4ನೇ ದಿನವೂ ಮುಂದುವರಿಯಿತು.
ಸಂಘದ ತಾಲೂಕಾಧ್ಯಕ್ಷ ಎಂ ಬಿ ಸಿಗಿಹೊಳಿ ಮಾತನಾಡಿ ನಮ್ಮ ಬೇಡಿಕೆಗಳನ್ನು ಅಗ್ರಹಿಸಿ ಕಳೆದ ಬಾರಿ ಮುಸ್ಕರ ನಡೆಸಿದಾಗ ಸರಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನಲೆ ಮುಸ್ಕರ ಹಿಂಪಡೆಯಲಾಗಿತ್ತು. ಆದರೆ ಸರಕಾರವು ಇಲ್ಲಿಯವರೆಗೂ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷಿಸಿರುವುದು ನಿಜಕ್ಕೂ ಶೋಚನಿಯ ಸಂಗತಿಯಾಗಿದೆ. ಆದಕಾರಣ ಈ ಬಾರಿ ಕೂಡಲೇ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವರೆಗೂ ನಾವು ಮತ್ತೆ ಮುಸ್ಕರವನ್ನು ಪ್ರಾರಂಬಿಸಿದ್ದು ಯಾವುದೇ ಪರಿಸ್ಥಿತಿಯಲ್ಲಿ ನಮ್ಮ ಬೇಡಿಕೆಗಳು ಈಡೇರುವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರಭಾವಿ ಕಂದಾಯ ನಿರೀಕ್ಷಿಕರಾದ ಸಂಗಣ್ಣ ಹೊಸಮನಿ ಅವರು ಮುಷ್ಕರ ಸ್ಥಳಕ್ಕೆ ಆಗಮಿಸಿ ಗ್ರಾಮ ಆಡಳಿತ ಆಧಿಕಾರಿಗಳಿಗೆ ನೈತಿಕ ಬೆಂಬಲ ನೀಡಿ ಮುಷ್ಕರದಲ್ಲಿ ಬಾಗಿಯಾದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಸಮಾಜ ಸೇವಕರಾದ ಮುರಿಗೆಪ್ಪ ಮಾಲಗಾರ ಅವರು ಮುಷ್ಕರದಲ್ಲಿ ಬಾಗಿಯಾಗಿ ಮಾತನಾಡಿ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳೆಲ್ಲವೂ ಸರಿಯಾಗಿದ್ದು ಮೂಲಭೂತ ಸೌಕರ್ಯಗಳೆಲ್ಲವೂ ಕೂಡಲೇ ಈಡೇರಿಸಬೇಕೆಂದು ಸರಕಾರಕ್ಕೆ ಆಗ್ರಹ ಮಾಡಿದರು.ಹೀಗೆ ಮುಸ್ಕರ ಮುಂದುವರೆದರೆ ರೈತರು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಸರಕಾರವು ಕೂಡಲೇ ಸ್ಪಂದನೆ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಅಮೀನ ಲಾಡಖಾನ ಉಪಾಧ್ಯಕ್ಷ ಭಾರತಿ ಕಾಳೆ. ಪ್ರಧಾನ ಕಾರ್ಯದರ್ಶಿ ಸಚೀನ ಕೊಣ್ಣೂರ. ಖಜಾಂಚಿ ಪಕೃದ್ದಿನ ಪತ್ತೇಖಾನ. ಗ್ರಾಮ ಆಡಳಿತ ಅಧಿಕಾರಿಗಳಾದ ಎಂ ಎಂ ಮುಲ್ಲಾ. ಸಂಜು ಅಗ್ನೇಪ್ಪಗೋಳ.ಎ ಎಸ್ ಬಾಗವಾನ. ಎಂ ಎಚ್ ಹೋಳ್ಕರ್. ಹನಮಂತ ಮಳ್ಳಿಗೇರಿ. ಸುರೇಶ ತುಪ್ಪದ. ಗೋಪಾಲ ಮುತ್ತೇಪ್ಪಗೋಳ. ಸುರೇಖಾ ಇರಕರ. ಕರೀಸ್ಮಾ ನದಾಫ. ಇನ್ನಿತರರು ಮುಷ್ಕರದಲ್ಲಿ ಭಾಗಿಯಾಗಿದ್ದರು.