ಹಳ್ಳೂರ.
ಸಮೀಪದ ಕಪ್ಪಲಗುದ್ದಿ ಗ್ರಾಮದ ಯಲ್ಲಪ್ಪ ದುಂಡಪ್ಪ ಬೆಳಗಲಿ ಅವರು 1 ಎಕರೆ 30 ಗುಂಟೆ ಜಮೀನಲ್ಲಿ 80 ಕ್ವಿಂಟಾಲ್ ಅರಿಷಿನ ಬೆಳೆ ಬೆಳೆದು ದಾಖಲೆ ಮೆರೆದಿದ್ದಾರೆ.
ಅತೀ ಹೆಚ್ಚು ಅರಿಶಿಣ ಬೆಳೆದಿದ್ದಕ್ಕೇ ಜಮೀನಿನ ಮಾಲಿಕನ ಮುಖದಲ್ಲಿ ಮಂದಹಾಸ ಮೂಡಿ ಸಂತೋಷ ವ್ಯಕ್ತ ಪಡಿಸಿದರು. ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಉಪಯೋಗಿಸದೆ ಸಾವಯುವ ತಿಪ್ಪಿ ಗೊಬ್ಬರಗಳನ್ನು ಹೆಚ್ಚಾಗಿ ಉಪಯೋಗಿಸಿ ಹಿಂದಿನ ಕೃಷಿ ಪದ್ಧತಿಯನ್ನು ಅನುಸರಿಸಿಕೊಂಡು ಈ ವರ್ಷ ಕಡಿಮೆ ಜಮೀನಲ್ಲಿ ಹೆಚ್ಚು ಅರಿಶಿಣವನ್ನು ಬೆಳೆದಿದ್ದಾರೆ.





